Ticker

6/recent/ticker-posts

Ad Code

ದೆಹಲಿಯಲ್ಲಿ ಕಾರು ಬಾಂಬು ಸ್ಪೋಟ : 8 ಬಲಿ - ಉಗ್ರರ ಕೃತ್ಯ ಶಂಕೆ,ಒರ್ವ ವಶ

 


ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಕಾರು ಸ್ಫೋಟಗೊಂಡು 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿನ ಭೀಕರ ಸ್ಫೋಟದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದಾರೆ.ಗೃಹ ಸಚಿವ  ಪರಿಸ್ಥಿತಿಯನ್ನು ಅವಲೋಕಿಸಿ ನಾಳೆ ಪೂರ್ಣ ಮಾಹಿತಿ ಬಹಿರಂಗ ಪಡೆಸುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಘಟನಾ ಸ್ಥಳ ಸಂದರ್ಶಿಸಿದ ಪ್ರಧಾನಿ ಮೋದಿ ಗಾಯಗೊಂಡವರ ಸಂದರ್ಶನ

ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ತೀವ್ರ ಸ್ಫೋಟದಲ್ಲಿ ಕಾರು ಛಿದ್ರಗೊಂಡು ಹಲವಾರು ವಾಹನಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಘಟನೆಯಲ್ಲಿ 8 ಜನ ಬಲಿಯಾಗಿದ್ದಾರೆ. ಸ್ಪೋಟಗೊಂಡ ಕಾರು ಫರಿಧಬಾದ್ ನ ನಜೀಮ್ ಎಂಬಾತನ ಕಾರು ಎಂಬುದಾಗಿ ತಿಳಿದು ಬಂದಿದ್ದು ಸಲ್ಮಾನ್ ಎಂಬಾತ ಮೂಲ ಮಾಲಿಕ ಎನ್ನಲಾಗಿದೆ. ಇದೇ ವೇಳೆ ಶಂಕಿತನೋರ್ವನ‌  ಪೋಲಿಸರು ವಶದಲ್ಲಿಟ್ಟು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ 12  ಗಂಟೆಗಳ ಒಳಗೆ ಈ ಸ್ಫೋಟ ಸಂಭವಿಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ ಮತ್ತು ಇದು ಉಗ್ರರ ಕೃತ್ಯ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

Post a Comment

0 Comments