ಬದಿಯಡ್ಕ: ಕ್ಯಾಂಪ್ಕೊ ಸಂಸ್ಥೆಯ " ಸಾಂತ್ವನ "ಯೋಜನೆಯಡಿಯಲ್ಲಿ ಕ್ಯಾಂಪ್ಕ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಬಾಬು ಪಾಠಾಳಿ ಅವರ ತೆರೆದ ಹೃದಯ ಶಸ್ತ್ರ ಚಿಕಿತ್ಸಾ ವೆಚ್ಚದ ಸಹಾಯಧನ ₹ 2,00,000/- ವನ್ನು ಕ್ಯಾಂಪ್ಕೊ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ಅವರು ಹಸ್ತಾಂತರಿಸಿದರು.
ಕ್ಯಾಂಪ್ಕೊ ಸಂಸ್ಥೆಯ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಚಂದ್ರ ಎಂ, ಕ್ಯಾಂಪ್ಕೊ ಬದಿಯಡ್ಕ ಶಾಖಾ ವ್ಯವಸ್ಥಾಪಕರಾದ ಶ್ರೀ ಶ್ಯಾಂ ಪ್ರಶಾಂತ ಅವರ ಸಮ್ಮುಖದಲ್ಲಿ ಫಲಾನುಭವಿಗಳ ಮನೆಗೆ ತೆರಳಿ ಹಸ್ತಾಂತರಿಸಿದರು.
0 Comments