ಕುಂಬಳೆ: ಕಿದೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಪ್ರಶ್ನೆ ಚಿಂತನೆ ಪರಿಹಾರ ಕಾರ್ಯಗಳು ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರಂಗವಾಗಿ ಬೆಳಗ್ಗೆ ಮಹಾಗಣಪತಿ ಹೋಮ, ಅಖಂಡ ನಾಮಜಪ ಯಜ್ಞ,
ಏಕಾದಶ ರುದ್ರಾಭಿಷೇಕ, ನಿಧಿಕುಂಭ ಸಮರ್ಪಣೆ, ರಾತ್ರಿ ಅಘೋರ ಹೋಮ, ಪ್ರೇತಾವಾಹನೆ, ಬಾಧೋಚ್ಚಾಟನೆ, ಸಾಯುಜ್ಯ ಕ್ರಿಯೆಗಳು ನಡೆಯಿತು. ನೂರಾರು ಭಕ್ತರು ಪಾಲ್ಗೊಂಡರು.
0 Comments