Ticker

6/recent/ticker-posts

Ad Code

ರಾಜ್ಯದಲ್ಲಿ 'ತುಲಾ ವರ್ಷ' ಸಕ್ರಿಯ; ಎರ್ನಾಕುಲಂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್, 7 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ "ತುಲಾ ವರ್ಷ" ಸಕ್ರಿಯವಾಗಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಯ, ಕೊಟ್ಟಯಂ, ಇಡುಕ್ಕಿ, ತ್ರಿಶೂರು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮದ್ತಾಹ್ನ ನಂತರ ಸಿಡಿಲು ಸಹಿತ ಮಳೆ ಸಾಧ್ಯತೆ ಇದೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ನೆರೆಯ ಮಂಗಳೂರು, ಪುತ್ತೂರು, ಸುಳ್ಯ ಭಾಗಗಳಲ್ಲೂ ಮಳೆಯ ಸಾಧ್ಯರೆಯಿದ್ದು ಇದು ಕಾಸರಗೋಡು ಜಿಲ್ಲೆಗೂ ಬಾಧಿಸಲಿದೆ. ಕೇರಳ, ಕರ್ಣಾಟಕ, ಲಕ್ಷದ್ವೀಪ ಎಂಬೆಡೆಗಳಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.‌ಮಳೆಯ ಜತೆ 40 ಕಿ.ಮೀ.ವೇಗದ ಗಾಳಿಯೂ ಬೀಸಲಿದೆ

Post a Comment

0 Comments