Ticker

6/recent/ticker-posts

Ad Code

ನ.8ಕ್ಕೆ ಅಗಲ್ಪಾಡಿ ಪಾಂಚಜನ್ಯ ಆಡಿಟೋರಿಯಂನಲ್ಲಿ ಕಾಂತಾರ 2 ಪ್ರದರ್ಶನ

 


ಬದಿಯಡ್ಕ : ಭಾರತೀಯ ಚಲನ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ  ಖ್ಯಾತ ಕನ್ನಡ ಚಲನಚಿತ್ರ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಸೂಪರ್ ಹಿಟ್ ಚಲನಚಿತ್ರ "ಕಾಂತಾರ -2" ನ.8  ಶನಿವಾರ ಸಂಜೆ 6.30 ರಿಂದ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ  ಪ್ರದರ್ಶನಗೊಳ್ಳಲಿದೆ.ಪ್ರದರ್ಶನ ಸಂಪೂರ್ಣ ಉಚಿತವಾಗಿರುತ್ತದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹರಿನಾರಾಯಣ ಮಾಸ್ಟರ್ ದೀಪ ಪ್ರಜ್ವಲನೆಗೊಳಿಸಲಿದ್ದಾರೆ. ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹಾಗೂ ಕಾಂತಾರ-2 ಗಳ ಪೋಷಕ ನಟ ರಾಧಾಕೃಷ್ಣ ಕುಂಬಳೆ ಮುಖ್ಯ ಅತಿಥಿಗಳಾಗಿರುವರು.ಕುಂಬಡಾಜೆ ಪಂಚಾಯತ್ ಸದಸ್ಯ ಹರೀಶ್ ಗೋಸಾಡ,ಡಾ. ವೇಣುಗೋಪಾಲ ಕಲಯತ್ತೋಡಿ, ರಾಮಚಂದ್ರ ಪದ್ಮಾರು, ಬಾಬು ಮಾಸ್ಟರ್ ಅಗಲ್ಪಾಡಿ,ಕರಿಯಪ್ಪ ಪಿ ಯಂ,ನಟರಾಜ್ ಕಲ್ಲಕಳಂಬಿ, ಸುಧಾಮ ಪದ್ಮಾರು, ದೀಪಕ್ ಬೆದ್ರುಕೂಡ್ಲು,ರಾಜೇಶ್ ಮಾಸ್ಟರ್ ಅಗಲ್ಪಾಡಿ,ರಮೇಶ್ ಕೃಷ್ಣ ಪದ್ಮಾರ್ ಮೊದಲಾದವರು ಭಾಗವಹಿಸುವರು.

Post a Comment

0 Comments