ನೀರ್ಚಾಲು : ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಕುಮಾರಮಂಗಲ ಸಮೀಪದ ಧನ್ವಂತರಿ ಶ್ರೀವನದಲ್ಲಿ ಶ್ರಮದಾನ , ಸೇವಾ ಅರ್ಘ್ಯ ನಡೆಯಿತು. ಶ್ರಮದಾನ ಕಾರ್ಯದಲ್ಲಿ ಪರಿಸರವನ್ನು ಶುಚಿಗೊಳಿಸಲಾಯಿತು ಹಾಗೂ ಪೂರ್ವಭಾಗದ ಗಡಿ ಭಾಗದಲ್ಲಿ ಕಲ್ಲು ಇರಿಸಿ ಗಡಿ ಗುರುತಿಸಲಾಯಿತು.
ಧನ್ವಂತರಿ ಶ್ರೀವನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ, ವೈದ್ಯ ವೈ ವಿ ಕೃಷ್ಣಮೂರ್ತಿ ಏತಡ್ಕ ನೇತೃತ್ವವಹಿಸಿದ್ದರು. ಶ್ರಮದಾನದಲ್ಲಿ ಮಂಡಲ ಶಿಷ್ಯಮಾಧ್ಯಮ ಪ್ರಧಾನ ಮಹೇಶ ಕೃಷ್ಣ ತೇಜಸ್ವಿ ಕುಳಮರ್ವ, ನೀರ್ಚಾಲು ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಶಿಮಲಡ್ಕ, ಕೋಶ ವಿಭಾಗದ ಮಹೇಶ ಸರಳಿ, ಗುರಿಕ್ಕಾರ ಗೋಪಾಲಕೃಷ್ಣ ಭಟ್ ಕುಂಜಾರು, ಗೋಪಾಲಕೃಷ್ಣ ಭಟ್ ಕುಳಮರ್ವ, ಧನೀಷ್ ಪಜಿಲ, ಶ್ರೀರಾಮಚಂದ್ರ ಭಟ್ ಮಧುರಕಾನನ, ಭಾಗವಹಿಸಿದರು.
ಶ್ರಮದಾನದ ನಂತರ ನಡೆದ ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳ ಕುರಿತು ಸಾಮಾಲೋಚಿಸಲಾಯಿತು. ಧನ್ವಂತರಿ ಶ್ರೀವನದ ಸಂಚಾಲಕ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದರು.

0 Comments